ನಿಮ್ಮೆಲ್ಲರಿಗೂ ೬೧ನೆ ಭಾರತ ಸ್ವಾತಂತ್ರೋತ್ಸವದ ಶುಭಾಶಯಗಳು! ಪ್ರಪಂಚದ ಪ್ರಜಾಪ್ರಭುತ್ವಗಳ ಚರಿತ್ರೆಯಲ್ಲಿ, ಅರವತ್ತೊಂದು ಒಂದುತರಹ ಬಾಲ್ಯ ಅಥವಾ ಕೌಮಾರ್ಯವೇ ಇದ್ದ ಹಾಗೆ. ಈ ಅವಸರದಲ್ಲಿ, ಹುಟ್ಟುವಾಗ ತೋರಿದ ದೃಷ್ಟಿ ಹಾಗು ಈಗಿನ ತಾತ್ಕಾಲಿಕ ಸಾಧನೆಗಳನ್ನು ಪರಿಶೀಲಿಸುವುದು ಸುಸಂಬದ್ಧವಲ್ಲವೇ?
೧೯೪೭ ಆಗುಸ್ಟ್ ೧೪ ರಂದು ಮಧ್ಯ ರಾತ್ರಿ ೧೨ ಗಂಟೆಗೆ ಗಳಿಸಿದ ಸ್ವಾತಂತ್ರ ಮಹೂರ್ತದಲ್ಲಿ ನಮ್ಮ ನವ ದೇಶದ ನಾಯಕ ಶ್ರೀ ಜವಾಹರ್ಲಾಲ್ ನೆಹರುರವರು ದೇಶದ ಜನತೆಗೆ ಹಾಗು ಪ್ರಪಂಚಕ್ಕೆ ನೀಡಿದ "Tyrst with Destiny" ಭಾಷಣವನ್ನು ಇಲ್ಲಿ ಓದಿರಿ.
ಅದೇ ಗಳಿಗೆಯಲ್ಲಿ, ನಮ್ಮ ಮೆಚ್ಚಿನ ಮಹಾತ್ಮಗಾಂಧಿಜಿಯವರು ಎಲ್ಲಿದ್ದರೆಂದು ಬೆಲ್ಲೆರಾ? ಕೋಮು ಗಲಭೆಯಲ್ಲಿ ಮುಳುಗಿದ್ದ ಕಲ್ಕತ್ತಾ ನಗರಿಯಲ್ಲಿ; ನಡೆಯುತ್ತಿದ್ದ ಹಿಂಸೆಗಳನ್ನು ನಿಲ್ಲಿಸಲು ಏಕಾಏಕಿಯಾಗಿ ಅಹಿಂಸಾ ಮಾರ್ಗದಲ್ಲಿ ಸತ್ಯಾಗ್ರಹವನ್ನೂಡಿದ್ದರು. ಈ ಪ್ರಸಂಗದ ಒಂದು ಚಿಕ್ಕ ಒಡನೋಟಕ್ಕೆ Horace Alexander ರವರ ಪತ್ರ ಓದಿರಿ.
೬೧ನೆ ಸ್ವಾತಂತ್ರ ದಿನಾಚರಣೆಯಂದು ಭಾವಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಂರವರ ಭಾವನೆಗಳನ್ನು ಇಲ್ಲಿ ಓದಿರಿ.